Dr Lodaya Hospital

ಡಾ. ಸುನೀತಾ ಲೋಡಾಯಾ

ಡಾ. ಸುನೀತಾ ಲೋಡಾಯಾ

MBBS, DGO, DNB, DFP, PGDHA, DPH, Fellow in infertility

ಹಾವೇರಿಯಲ್ಲಿಯ ಐ.ವಿ.ಎಫ್ ಸ್ಪೆಷಲಿಸ್ಟ್

ಡಾ. ಸುನೀತಾ ಲೋಡಾಯಾ 2000 ಇಸವಿಯಿಂದ ಹಾವೇರಿಯಲ್ಲಿ ನೆಲೆಸಿದ್ದು ಅತ್ಯಂತ ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದಾರೆ. ಅವರು ತಮ್ಮ ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿ ನಂತರ ಸ್ನಾತಕೋತ್ತರ ಅಧ್ಯಯನವನ್ನು ಮಾಡಿದ್ದು, ಡಿ.ಜಿ.ಒ, ಡಿ.ಎನ್.ಬಿ, ಡಿ.ಎಫ್.ಬಿ, ಪಿ.ಜಿ.ಡಿ.ಎಚ್.ಎ, ಡಿ.ಪಿ.ಎಚ್ ಮತ್ತು ಬಂಜೆತನ ನಿವಾರಣೆ ಕ್ಷೇತ್ರದಲ್ಲಿ ಫೆಲೋ ಸೇರಿದಂತೆ ವಿಶೇಷ ಅರ್ಹತೆಗಳನ್ನು ಗಳಿಸಿದರು. ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಅವರು, ಬಂಜೆತನ ನಿವಾರಣೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಮಹಿಳೆಯರಿಗೆ ಸಮಗ್ರ ಆರೈಕೆಯನ್ನು ಒದಗಿಸಲು ತಮ್ಮ ವೃತ್ತಿಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಪರಿಣಿತಿಯ ಕ್ಷೇತ್ರಗಳು

ಡಾ.ಸುನೀತಾ ಲೋಡಾಯಾ ಅವರು ಹಾವೇರಿಯ ಅತ್ಯುತ್ತಮ ಐ.ವಿ.ಎಫ್ ವೈದ್ಯರಾಗಿದ್ದಾರೆ ಮತ್ತು ಅವರ ಪರಿಣಿತಿ ಬಂಜೆತನ ನಿವಾರಣೆ ಕ್ಷೇತ್ರದಲ್ಲಿದೆ. ಅಲ್ಲಿ ಅವರು ಕೇವಲ ಸುಧಾರಿತ ಚಿಕಿತ್ಸೆಗಳನ್ನು ನೀಡುವುದಷ್ಟೇ ಅಲ್ಲದೇ ತಮ್ಮ ರೋಗಿಗಳಿಗೆ ಕಾಳಜಿಪೂರ್ವಕ ಆರೈಕೆಯನ್ನೂ ಒದಗಿಸುತ್ತಾರೆ, ಅವರ ಭಾವನಾತ್ಮಕ ವಿಚಾರಗಳು (ಇಕ್ಯೂ) ಮತ್ತು ಆಧ್ಯಾತ್ಮಿಕ ಅಲೋಚನೆಗಳನ್ನು (ಎಸ್.ಕ್ಯು) ಹೆಚ್ಚಿಸುವತ್ತ ಗಮನ ಹರಿಸುತ್ತಾರೆ. ಅವರು ಹಾವೇರಿಯಲ್ಲಿ ದೊಡ್ಡ ಆಸ್ಪತ್ರೆ ಮತ್ತು ಐವಿಎಫ್ ಕೇಂದ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಸಹಾನುಭೂತಿ ಪೂರ್ವಕ ವಿಧಾನಗಳು ಮತ್ತು ಸಂವಹನ ಪದ್ಧತಿಗಳ ಮೂಲಕ ದಂಪತಿಗಳ ಮಗು ಪಡೆಯುವ ಕನಸನ್ನು ನನಸಾಗಿಸುತಿದ್ದಾರೆ.
ಅವರು ತಮ್ಮ ರೋಗಿಗಳ ಒಟ್ಟಾರೆ ಯೋಗಕ್ಷೇಮಕ್ಕಾಗಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಜೊತೆಗೆ, ಸುಧಾರಿತ ಗರ್ಭ ಸಂಸ್ಕಾರ ತಂತ್ರಗಳೊಂದಿಗೆ, ಐ.ವಿ.ಎಫ್ ಮತ್ತು ಐ.ಯು.ಐ ಕ್ಷೇತ್ರದ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ವಿಧಾನಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಪ್ರಾಚೀನ ಜ್ಞಾನದಲ್ಲಿ ಬೇರೂರಿರುವ ಈ ತಂತ್ರಗಳು, ತಾಯಿ ಮತ್ತು ಹುಟ್ಟಲಿರುವ ಮಗುವಿನ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಪೋಷಿಸುವತ್ತ ಗಮನ ಹರಿಸುತ್ತವೆ. ಇದು ಮಗುವಿನ ಸೂಕ್ತ ಬೆಳವಣಿಗೆಗೆ ಅತ್ಯುತ್ತಮ ಪ್ರಸವಪೂರ್ವ ವಾತಾವರಣವನ್ನು ಸೃಷ್ಟಿಸುತ್ತದ. ಸಮಗ್ರ ಆರೈಕೆಯನ್ನು ಒದಗಿಸುವ ಡಾ.ಲೋಡಾಯಾ ಅವರ ಬದ್ಧತೆ, ಜ್ಞಾನದ ನಿರಂತರ ಅನ್ವೇಷಣೆ ಮತ್ತು ಹೊಸ ವಿಧಾನಗಳು, ತಮ್ಮ ರೋಗಿಗಳಿಗೆ ಸಂತಾನೋತ್ಪತ್ತಿ ಫಲಿತಾಂಶಗಳನ್ನು ಸುಧಾರಿಸುವ ಅವರ ಸಮರ್ಪಣಾ ಭಾವವನ್ನು ಎದ್ದು ಕಾಣುವಂತೆ ಮಾಡುತ್ತದೆ.

ಪ್ರಶಸ್ತಿಗಳು ಮತ್ತು ಪ್ರಶಂಸೆಗಳು

ಡಾ.ಸುನೀತಾ ಲೋಡಾಯಾ ಅವರು ಹಾವೇರಿಯ ಪ್ರಸಿದ್ಧ ಸ್ತ್ರೀರೋಗ ತಜ್ಞರಾಗಿದ್ದಾರೆ. ಮಹಿಳೆಯರ ಆರೋಗ್ಯ ಮತ್ತು ಬಂಜೆತನ ನಿವಾರಣೆ ಚಿಕಿತ್ಸೆಗೆ ಅವರು ನೀಡಿದ ಕೊಡುಗೆಗಳನ್ನು ಗುರುತಿಸಿ ಅವರ ಸಹವರ್ತಿಗಳು ಮತ್ತು ರೋಗಿಗಳಿಂದ ಸಮಾನವಾಗಿ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಗಳಿಸಿದ್ದಾರೆ. ಗರ್ಭ ಸಂಸ್ಕಾರ, ಸ್ತನ ಮತ್ತು ಸೆರ್ವಿಕಲ್ ಕ್ಯಾನ್ಸರ್, ಒತ್ತಡ ನಿರ್ವಹಣೆ ಮತ್ತು ಬಂಜೆತನ ನಿವಾರಣೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅವರ ಬದ್ಧತೆ ಮೆಚ್ಚುಗೆ ಮೂಡಿಸುವಂಥದ್ದು. ಸಮುದಾಯದ ಯೋಗಕ್ಷೇಮವನ್ನು ಸುಧಾರಿಸುಲ್ಲಿನ ಅವರ ಸಮರ್ಪಣಾ ಮನೋಭಾವ ಅತ್ಯಂತ ಶ್ಲಾಘನೀಯ.